ಷಟ್ತಿಲಾ ಏಕಾದಶಿ 2025

ಹಿಂದೂ ಧರ್ಮದಲ್ಲಿ, ಏಕಾದಶಿ ಯನ್ನು ಬಹಳ ಮಹತ್ವಪೂರ್ಣ ಮತ್ತು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಏಕಾದಶಿಯಂದು ಭಗವಂತ ವಿಷ್ಣುವನ್ನು ಪೂಜಿಸುವುದು ಅತ್ಯಗತ್ಯ. ಒಂದು ವರ್ಷದಲ್ಲಿ, ಒಟ್ಟು 24 ಏಕಾದಶಿಗಳಿವೆ, ಅವುಗಳಲ್ಲಿ ಷಟ್ತಿಲಾ ಏಕಾದಶಿಯನ್ನು ಪ್ರಮುಖವೆಂದು ಪರಿಗಣಿಸಲಾಗುತ್ತದೆ. ಈ ವಿಶೇಷ ಆಸ್ಟ್ರೋಸೇಜ್ ಎಐ ಬ್ಲಾಗ್‌ನಲ್ಲಿ, ಓದುಗರು ಷಟ್ತಿಲಾ ಏಕಾದಶಿ 2025 ರ ಬಗ್ಗೆ ತಿಳಿದುಕೊಳ್ಳಬಹುದು. ಇದರೊಂದಿಗೆ, ಪೂಜೆಯ ಮುಹೂರ್ತ, ಅದರ ಪ್ರಾಮುಖ್ಯತೆ, ಸರಿಯಾದ ಪೂಜಾ ವಿಧಾನ, ಈ ಏಕಾದಶಿಯ ಪೌರಾಣಿಕ ಕಥೆ ಮತ್ತು ಈ ದಿನದಂದು ತೆಗೆದುಕೊಳ್ಳಬೇಕಾದ ಸರಳ ಕ್ರಮಗಳ ವಿವರಗಳನ್ನು ತಿಳಿದುಕೊಳ್ಳೋಣ.

ಷಟ್ತಿಲಾ ಏಕಾದಶಿ 2025

ದಿನಾಂಕ ಮತ್ತು ಸಮಯ

ಷಟ್ತಿಲಾ ಏಕಾದಶಿಯು 25 ಜನವರಿ 2025, ಶನಿವಾರದಂದು ಬರುತ್ತದೆ. ಈ ಏಕಾದಶಿ ತಿಥಿಯು 24 ಜನವರಿ 2025 ರಂದು ರಾತ್ರಿ 07:27 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮರುದಿನ 25 ಜನವರಿ 2025 ರಂದು ರಾತ್ರಿ 08:34 ಕ್ಕೆ ಕೊನೆಗೊಳ್ಳುತ್ತದೆ. ಉದಯ ತಿಥಿಯ ಪ್ರಕಾರ ಷಟ್ತಿಲಾ ಏಕಾದಶಿ ಈ ಉಪವಾಸವನ್ನು ಜನವರಿ 25, 2025 ರಂದು ಮಾತ್ರ ಮಾಡಲಾಗುತ್ತದೆ.

ಈ ಫೆಬ್ರವರಿ ಮಾಸಿಕ ಜಾತಕ 2025 ರ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ಅತ್ಯುತ್ತಮ ಜ್ಯೋತಿಷಿ ಗಳೊಂದಿಗೆ ಮಾತನಾಡಿ

ಷಟ್ತಿಲಾ ಏಕಾದಶಿಯ ಮಹತ್ವ

ಈ ರೀತಿಯ ಏಕಾದಶಿಯು ಎಳ್ಳು ಬೀಜಗಳೊಂದಿಗೆ ಸಂಬಂಧ ಹೊಂದಿದೆ. ಈ ಏಕಾದಶಿ ದಿನದಂದು ಇದನ್ನು ಆರು ರೀತಿಯಲ್ಲಿ ಬಳಸಲಾಗುತ್ತದೆ ಹಾಗಾಗಿ ಇದನ್ನು ಷಟ್ತಿಲ ಏಕಾದಶಿ ಎಂದು ಕರೆಯಲಾಗುತ್ತದೆ. ಹಿಂದೂ ಪಂಚಾಂಗದಲ್ಲಿ ಮಾಘ ಮಾಸವು ಭಗವಂತ ವಿಷ್ಣುವಿಗೆ ಅತ್ಯಂತ ಪ್ರಿಯವಾದುದು ಎಂಬುದು ನಂಬಿಕೆ. ಕೃಷ್ಣ ಪಕ್ಷದ ಹನ್ನೊಂದನೇ ದಿನದಂದು, ಮಾಘ ಮಾಸದಲ್ಲಿ ಷಟ್ತಿಲಾ ಏಕಾದಶಿ ಉಪವಾಸವನ್ನು ಆಚರಿಸಲಾಗುತ್ತದೆ. ಈ ದಿನದಂದು ನಿಜವಾದ ಹೃದಯ ಮತ್ತು ನಂಬಿಕೆಯಿಂದ ಉಪವಾಸ ಮಾಡುವ ಮತ್ತು ಪೂಜಿಸುವ ಮೂಲಕ ಭಕ್ತರು ತಮ್ಮ ಎಲ್ಲಾ ತೊಂದರೆಗಳನ್ನು ತೊಡೆದುಹಾಕಲು ಮತ್ತು ಉತ್ತಮ ಆರೋಗ್ಯವನ್ನು ಪಡೆಯಬಹುದು. ಈ ಏಕಾದಶಿಯಂದು ಉಪವಾಸ ಮಾಡುವುದರಿಂದ ಕನ್ಯಾದಾನದಷ್ಟು ಪುಣ್ಯ, ಫಲ ಸಿಗುತ್ತದೆ ಎನ್ನಲಾಗುತ್ತದೆ. ಆದ್ದರಿಂದ ನಾವು ಈ ವ್ರತದ ಮಹಿಮೆ ತಿಳಿಯಬಹುದು. ಷಟ್ಟಿಲ ಏಕಾದಶಿಯಂದು ಉಪವಾಸ ಮಾಡುವುದರಿಂದ ವ್ಯಕ್ತಿಯ ಎಲ್ಲಾ ದುಃಖಗಳು ಕೊನೆಗೊಳ್ಳುತ್ತವೆ ಮತ್ತು ಅವನು ಮರಣಾನಂತರ ಮೋಕ್ಷವನ್ನು ಪಡೆಯುತ್ತಾನೆ.

ನಿಮ್ಮ ಜೀವನಕ್ಕೆ ಸಂಬಂಧಿಸಿದ ಆಕಾಶಕಾಯಗಳ ಒಳನೋಟಗಳು ಬೇಕೇ? ರಾಶಿಭವಿಷ್ಯ 2025 ರಲ್ಲಿ ನಿಮ್ಮ ರಾಶಿಗಾಗಿ ಕಾಯುತ್ತಿರುವ ಅವಕಾಶಗಳನ್ನು ಅನ್ವೇಷಿಸಿ!

ಉಪವಾಸ ಮಾಡುವ ವಿಧಾನ

ಷಟ್ತಿಲಾ ಏಕಾದಶಿ 2025 ರಂದು ಉಪವಾಸ ಮಾಡಲು ಯೋಜಿಸುತ್ತಿದ್ದರೆ, ಭಕ್ತರು ಈ ಮಂಗಳಕರ ದಿನದಂದು ಸೂಕ್ತ ಪೂಜಾ ವಿಧಾನ ಅನುಸರಿಸಿ ಉಪವಾಸವನ್ನು ಆಚರಿಸಬೇಕು. ಏಕಾದಶಿ ಉಪವಾಸದ ನಿಯಮಗಳು ದಶಮಿ ತಿಥಿಯಿಂದ ಪ್ರಾರಂಭವಾಗುತ್ತವೆ. ನಿಯಮದ ಪ್ರಕಾರ, ದಶಮಿ ತಿಥಿಯಂದು ಸೂರ್ಯಾಸ್ತದ ನಂತರ ಭಕ್ತನು ಆಹಾರವನ್ನು ಸೇವಿಸುವುದನ್ನು ತಪ್ಪಿಸಬೇಕು. ಅದಲ್ಲದೆ ರಾತ್ರಿ ಮಲಗುವ ಮುನ್ನ ವಿಷ್ಣುವನ್ನು ಸ್ಮರಿಸಿ ಧ್ಯಾನಿಸಬೇಕು.

ಷಟ್ತಿಲಾ ಏಕಾದಶಿಯ ದಿನ ಬೆಳಿಗ್ಗೆ ಎದ್ದು ನಿಮ್ಮ ದೈನಂದಿನ ಕೆಲಸಗಳನ್ನು ಮುಗಿಸಿ. ಒಂದು ಪಾತ್ರೆಯಲ್ಲಿ ನೀರು ತುಂಬಿಸಿ ನಂತರ ಅದಕ್ಕೆ ಎಳ್ಳು ಸೇರಿಸಿ ಸ್ನಾನ ಮಾಡಿ. ಇದರ ನಂತರ, ವಿಷ್ಣುವನ್ನು ಧ್ಯಾನಿಸುತ್ತಾ ಉಪವಾಸವನ್ನು ಆಚರಿಸಲು ಪ್ರತಿಜ್ಞೆ ಮಾಡಿ. ನಿಮ್ಮ ಮನೆಯ ಪೂಜಾ ಸ್ಥಳದಲ್ಲಿ, ಪೀಠದ ಮೇಲೆ ವಿಷ್ಣುವಿನ ಚಿತ್ರ ಅಥವಾ ವಿಗ್ರಹವನ್ನು ಇರಿಸಿ. ಈಗ ವಿಗ್ರಹಗಳ ಮೇಲೆ ಗಂಗಾಜಲ ಮಿಶ್ರಿತ ಎಳ್ಳನ್ನು ಸಿಂಪಡಿಸಿ ಮತ್ತು ಪಂಚಾಮೃತದಿಂದ ಸ್ನಾನ ಮಾಡಿಸಿ. ಪಂಚಾಮೃತಕ್ಕೆ ಎಳ್ಳನ್ನು ಸೇರಿಸುವುದನ್ನು ಖಚಿತಪಡಿಸಿಕೊಳ್ಳಿ.

ಅದರ ನಂತರ, ವಿಷ್ಣುವಿನ ಮೂರ್ತಿಯ ಮುಂದೆ, ಶುದ್ಧ ತುಪ್ಪದ ದೀಪವನ್ನು ಬೆಳಗಿಸಿ ಮತ್ತು ಹೂವುಗಳನ್ನು ಅರ್ಪಿಸಿ. ನಂತರ, ವಿಷ್ಣು ಆರತಿಯನ್ನು ಧೂಪ ಮತ್ತು ದೀಪದೊಂದಿಗೆ ಮಾಡಿ ಮತ್ತು ವಿಷ್ಣು ಸಹಸ್ರನಾಮ ಪಠಿಸಿ. ಪೂಜೆಯ ನಂತರ ದೇವರಿಗೆ ಎಳ್ಳನ್ನು ಪ್ರಸಾದವಾಗಿ ಅರ್ಪಿಸಿ.

ಭವಿಷ್ಯದ ಎಲ್ಲಾ ಮೌಲ್ಯಯುತ ಒಳನೋಟಗಳಿಗಾಗಿ ಆಸ್ಟ್ರೋಸೇಜ್ ಬೃಹತ್ ಜಾತಕ

ಷಟ್ತಿಲಾ ಏಕಾದಶಿಯ ಪೌರಾಣಿಕ ಕಥೆ

ಒಮ್ಮೆ ಋಷಿ ನಾರದರು ವೈಕುಂಠಧಾಮಕ್ಕೆ ಹೋಗಿ ಭಗವಂತ ವಿಷ್ಣುವಿಗೆ ಷಟ್ತಿಲಾ ಏಕಾದಶಿ ಉಪವಾಸದ ಮಹತ್ವವನ್ನು ವಿಚಾರಿಸಿದರು. ಆಗ ವಿಷ್ಣು ಅದರ ಹಿಂದಿನ ಕಥೆ ಹೇಳಲಾರಂಭಿಸಿದನು. ಪತಿ ತೀರಿಕೊಂಡ ಬ್ರಾಹ್ಮಣನ ಹೆಂಡತಿ ಭೂಮಿಯಲ್ಲಿ ವಾಸಿಸುತ್ತಿದ್ದಳು. ಅವಳು ವಿಷ್ಣುವಿನ ಕಟ್ಟಾ ಭಕ್ತೆಯಾಗಿದ್ದಳು. ಒಮ್ಮೆ ಅವಳು ವಿಷ್ಣುವನ್ನು ಮೆಚ್ಚಿಸಲು ಪ್ರತಿ ತಿಂಗಳು ಉಪವಾಸವನ್ನು ಆಚರಿಸಿದಳು. ಈ ವ್ರತದಿಂದ ಅವಳ ದೇಹ ಶುದ್ಧವಾಯಿತು. ಆದರೆ, ಅವಳು ಎಂದಿಗೂ ಬ್ರಾಹ್ಮಣರಿಗೆ ಮತ್ತು ದೇವರಿಗೆ ಆಹಾರ ದಾನ ಮಾಡಲಿಲ್ಲ. ಒಂದು ದಿನ ವಿಷ್ಣುವೇ ಅವಳ ಬಳಿ ಭಿಕ್ಷೆ ಕೇಳಲು ಹೋದನು.

ವಿಷ್ಣು ಭಿಕ್ಷೆ ಕೇಳಿದಾಗ, ಆ ಮಹಿಳೆ ಮಣ್ಣಿನ ಉಂಡೆಯನ್ನು ಎತ್ತಿಕೊಂಡು ಅವನ ಕೈಗಳ ಮೇಲೆ ಇಟ್ಟಳು. ವಿಷ್ಣುವು ಆ ಮುದ್ದೆಯೊಂದಿಗೆ ವೈಕುಂಠಕ್ಕೆ ಹಿಂದಿರುಗಿದನು ಮತ್ತು ಸ್ವಲ್ಪ ಸಮಯದ ನಂತರ ಆ ಮಹಿಳೆ ಮರಣಹೊಂದಿದಳು ಮತ್ತು ವೈಕುಂಠದಲ್ಲಿ ಸ್ಥಾನ ಪಡೆದಳು. ಇಲ್ಲಿ ಅವಳು ಒಂದು ಗುಡಿಸಲು ಮತ್ತು ಮಾವಿನ ಮರವನ್ನು ಕಂಡುಕೊಂಡಳು. ಗುಡಿಸಲೊಳಗೆ ಏನೂ ಇರಲಿಲ್ಲ, ಮತ್ತು ಇದನ್ನು ನೋಡಿದ ಆಕೆ ವಿಷ್ಣುವಿನ ಬಳಿಗೆ ಹೋಗಿ, ಸದಾ ಧರ್ಮದ ಮಾರ್ಗದಲ್ಲಿ ನಡೆದರೂ ಗುಡಿಸಲು ಏಕೆ ಖಾಲಿಯಾಗಿದೆ ಎಂದು ಕೇಳಿದಳು. ನೀನು ಯಾರಿಗೂ ಯಾವತ್ತೂ ಅನ್ನದಾನ ಮಾಡಿಲ್ಲ, ಇದರಿಂದಾಗಿ ಇಂದು ಈ ಫಲ ಸಿಕ್ಕಿದೆ ಎಂದು ಭಗವಂತ ಕಾರಣ ಹೇಳಿದನು. ನಿನ್ನ ಗುಡಿಸಲಿಗೆ ದೇವತೆಗಳು ಬಂದು, ಷಟ್ತಿಲಾ ಏಕಾದಶಿ ಆಚರಿಸುವ ವಿಧಾನ ಹೇಳುವವರೆಗೂ ನೀನು ಗುಡಿಸಲಿನ ಬಾಗಿಲು ತೆರೆಯಬಾರದು ಎಂದು ಸೂಚಿಸಿದನು.

ಇದಾದ ನಂತರ ದೇವ ಕನ್ಯಾ ಹೇಳಿದ ವಿಧಾನದಂತೆ ಮಹಿಳೆ ಷಟ್ತಿಲಾ ಏಕಾದಶಿಯ ಉಪವಾಸವನ್ನು ಆಚರಿಸಿದಳು. ಈ ವ್ರತದ ಮಹಿಮೆಯಿಂದಾಗಿ ಆಕೆಯ ಗುಡಿಸಲಿನಲ್ಲಿ ಆಹಾರ ಧಾನ್ಯಗಳು, ಸಂಪತ್ತು ತುಂಬಿಕೊಂಡಿತು. ಷಟ್ತಿಲಾ ಏಕಾದಶಿಯ ಉಪವಾಸವನ್ನು ಆಚರಿಸುವ ವ್ಯಕ್ತಿ ಒಬ್ಬ ಹೃದಯವಂತ ಎಂದು ವಿಷ್ಣು ನಾರದನಿಗೆ ತಿಳಿಸಿದನು. ಈ ದಿನ ಎಳ್ಳನ್ನು ದಾನ ಮಾಡಿ ಮೋಕ್ಷ ಮತ್ತು ಸಮೃದ್ಧಿಯನ್ನು ಪಡೆಯುತ್ತಾರೆ.

ಷಟ್ತಿಲಾ ಏಕಾದಶಿಯಂದು ಮಾಡಬೇಕಾದ ಶುಭಕಾರ್ಯಗಳು

  • ಷಟ್ತಿಲಾ ಏಕಾದಶಿ 2025 ರಂದು ದೇವಸ್ಥಾನಕ್ಕೆ ಭೇಟಿ ನೀಡಿ ಮತ್ತು ಶಿವನ ಮುಂದೆ ದೀಪವನ್ನು ಬೆಳಗಿಸಿ. On ಇದರ ನಂತರ, ಶ್ರೀರಾಮನ ಹೆಸರನ್ನು 108 ಬಾರಿ ಜಪಿಸಿ. ನಂತರ, ಶಿವಲಿಂಗದ ಮೇಲೆ ನೀರನ್ನು ಅರ್ಪಿಸಿ, ಕಪ್ಪು ಎಳ್ಳನ್ನು ಅರ್ಪಿಸಿ ಮತ್ತು ಶಿವನನ್ನು ಹೂವುಗಳಿಂದ ಪೂಜಿಸಿ.
  • ಏಕಾದಶಿಯಂದು ಸೂರ್ಯಾಸ್ತದ ನಂತರ, ದೇವಸ್ಥಾನಕ್ಕೆ ಭೇಟಿ ನೀಡಿ ಮತ್ತು ಆಂಜನೇಯನ ವಿಗ್ರಹದ ಮುಂದೆ ದೀಪವನ್ನು ಬೆಳಗಿಸಿ. ನಂತರ ಸೀತಾ ರಾಮನ ಹೆಸರನ್ನು 108 ಬಾರಿ ಜಪಿಸಿ. ಬೆಳಗ್ಗೆ ತುಳಸಿ ಗಿಡಕ್ಕೆ ನೀರು ಹಾಕಿ ಸಂಜೆ ತುಳಸಿಯ ಮುಂದೆ ದೀಪ ಹಚ್ಚಿ.

ಕಾಗ್ನಿಆಸ್ಟ್ರೋ ವೃತ್ತಿಪರ ವರದಿ ಯೊಂದಿಗೆ ಅತ್ಯುತ್ತಮ ವೃತ್ತಿ ಸಮಾಲೋಚನೆ ಪಡೆಯಿರಿ

ಷಟ್ತಿಲಾ ಏಕಾದಶಿಯಂದು ಎಳ್ಳಿನ ಮಹತ್ವ

ಈ ಏಕಾದಶಿಯಂದು ಎಳ್ಳನ್ನು 6 ರೀತಿಯಲ್ಲಿ ಬಳಸಬಹುದು. ಮೊದಲು ಸ್ನಾನ ಮಾಡುವ ನೀರಿಗೆ ಎಳ್ಳು ಸೇರಿಸಿ ಸ್ನಾನ ಮಾಡಿ. ಎರಡನೆಯದಾಗಿ, ಈ ಶುಭ ಸಂದರ್ಭದಲ್ಲಿ ಎಳ್ಳಿನ ಎಣ್ಣೆಯಿಂದ ದೇಹವನ್ನು ಮಸಾಜ್ ಮಾಡಿ. ಮೂರನೆಯದು ಎಳ್ಳುಬೆಲ್ಲದ ಅಗ್ನಿಯಜ್ಞ ಮತ್ತು ನಾಲ್ಕನೆಯದು ಎಳ್ಳುನೀರು ಸೇವನೆ. ಐದನೆಯದು ಎಳ್ಳಿನ ದಾನ ಮತ್ತು ಆರನೆಯದು ಎಳ್ಳಿನಿಂದ ಮಾಡಿದ ವಸ್ತುಗಳ ಸೇವನೆ.

ಈ ದಿನ ಈ ಎಲ್ಲಾ 6 ವಿಧಾನಗಳಲ್ಲಿ ಎಳ್ಳನ್ನು ಬಳಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಇದರಿಂದ ಭಕ್ತರು ಮೋಕ್ಷವನ್ನು ಪಡೆಯುತ್ತಾರೆ. ಅಲ್ಲದೆ, ಈ ಮಂಗಳಕರ ದಿನದಂದು ಎಳ್ಳನ್ನು ದಾನ ಮಾಡುವುದರಿಂದ ಬಡತನ ಮತ್ತು ತೊಂದರೆಗಳು ದೂರವಾಗುತ್ತವೆ.

ಷಟ್ತಿಲಾ ಏಕಾದಶಿಯಂದು ಮಾಡಬೇಕಾದ ಜ್ಯೋತಿಷ್ಯ ಪರಿಹಾರಗಳು

  • ಷಟ್ತಿಲಾ ಏಕಾದಶಿಯಂದು ಸ್ನಾನ ಮಾಡುವ ನೀರಿಗೆ ಗಂಗಾಜಲ ಮತ್ತು ಎಳ್ಳು ಸೇರಿಸಿ ಸ್ನಾನ ಮಾಡಿ. ಸಾಧ್ಯವಾದರೆ, ಈ ದಿನ ಎಳ್ಳಿನ ಪೇಸ್ಟ್ ಅನ್ನು ನಿಮ್ಮ ದೇಹಕ್ಕೆ ಹಚ್ಚಬಹುದು. ಇದರಿಂದ ಆರೋಗ್ಯಕರ ದೇಹ ಪಡೆಯಬಹುದು ಮತ್ತು ಎಲ್ಲಾ ಪಾಪಗಳು ನಾಶವಾಗುತ್ತವೆ. ಆರೋಗ್ಯ ಸಮಸ್ಯೆಗಳ ಸಂದರ್ಭದಲ್ಲಿ, ಈ ಪರಿಹಾರವನ್ನು ಪ್ರಯತ್ನಿಸಬೇಡಿ.
  • ವಿಷ್ಣುವಿನ ಪೂಜೆಯ ನಂತರ, ಭಕ್ತರು ಎಳ್ಳನ್ನು ದಾನ ಮಾಡಬೇಕಾಗುತ್ತದೆ. ಈ ದಿನದಂದು ಹೆಚ್ಚಿನ ಎಳ್ಳಿನ ಕಾಳುಗಳನ್ನು ದಾನ ಮಾಡುವುದರಿಂದ ಸ್ವರ್ಗದಲ್ಲಿ ಹೆಚ್ಚು ಕಾಲ ಉಳಿಯಬಹುದು ಎಂಬುದು ನಂಬಿಕೆ. ಬಡತನ ತೊಡೆದುಹಾಕಲು ಮತ್ತು ದುಃಖ ಮತ್ತು ದುರದೃಷ್ಟವನ್ನು ಕೊನೆಗೊಳಿಸಲು ಈ ದಿನ ಎಳ್ಳನ್ನು ದಾನ ಮಾಡಿ.

ರಾಜಯೋಗದ ಸಮಯವನ್ನು ತಿಳಿಯಲು, ಈಗಲೇ ಆರ್ಡರ್ ಮಾಡಿ: ರಾಜಯೋಗ ವರದಿ

  • ಅದಲ್ಲದೆ, ಈ ಶುಭ ಸಂದರ್ಭದಲ್ಲಿ ಭಕ್ತರು ತಮ್ಮ ಆಹಾರದಲ್ಲಿ ಎಳ್ಳನ್ನು ಬಳಸಬೇಕಾಗುತ್ತದೆ. ಅವುಗಳನ್ನು ತಿನ್ನುವುದರಿಂದ ನೀವು ಆರೋಗ್ಯವಾಗಿರುತ್ತೀರಿ.
  • ಈ ಏಕಾದಶಿ ದಿನದಂದು ಎಳ್ಳು ಬೆಲ್ಲದ ಜೊತೆಗೆ ಹಣವನ್ನು ದಾನ ಮಾಡಿ. ಅಲ್ಲದೆ, ಕೆಲವು ನಾಣ್ಯಗಳನ್ನು ಸೇರಿಸಿ ಎಳ್ಳು ಲಡ್ಡುಗಳನ್ನು ದಾನ ಮಾಡಿ. ಇದನ್ನು ರಹಸ್ಯ ದಾನವೆಂದು ಪರಿಗಣಿಸಲಾಗುತ್ತದೆ ಮತ್ತು ಈ ಪರಿಹಾರದಿಂದ, ನಿಮ್ಮ ಅದೃಷ್ಟವು ಹೆಚ್ಚಾಗುತ್ತದೆ.
  • ಜಾತಕದಲ್ಲಿ ಶನಿ ದೋಷವಿರುವ ಜನರು ಪಿತೃ ದೋಷದಿಂದಾಗಿ ತಮ್ಮ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬಹುದು. ರಾಹು ಅಥವಾ ಕೇತುವಿನ ದುಷ್ಪರಿಣಾಮಗಳನ್ನು ಎದುರಿಸುತ್ತಿರುವ ವ್ಯಕ್ತಿಗಳು ಷಟ್ತಿಲಾ ಏಕಾದಶಿಯಂದು ಕಪ್ಪು ಎಳ್ಳನ್ನು ದಾನ ಮಾಡುವುದರಿಂದ ಲಾಭವಾಗುತ್ತದೆ. ಇದರಿಂದ ನಿಮ್ಮ ಎಲ್ಲಾ ದುಃಖಗಳನ್ನು ದೂರ ಮಾಡಬಹುದು.

ರಾಶಿಪ್ರಕಾರ ಪರಿಹಾರಗಳು

ಮೇಷ: ಈ ದಿನ ಕೆಂಪು ಬಟ್ಟೆಗಳನ್ನು ಧರಿಸಿ. ಎಳ್ಳು ದಾನ ಮಾಡಿ ಮತ್ತು ವಿಷ್ಣುವಿಗೆ ಕೆಂಪು ಹೂವುಗಳನ್ನು ಅರ್ಪಿಸಿ.

ವೃಷಭ: ದೇವಸ್ಥಾನಕ್ಕೆ ಎಳ್ಳು ದಾನ ಮಾಡಿ ಮತ್ತು ಬಡವರಿಗೆ ಬಟ್ಟೆ ನೀಡಿ.

ಮಿಥುನ: ವಿದ್ಯಾರ್ಥಿಗಳಿಗೆ ಪುಸ್ತಕ ಅಥವಾ ಅಧ್ಯಯನ ಸಾಮಾಗ್ರಿಗಳನ್ನು ನೀಡಿ. ಈ ದಿನ ಎಳ್ಳು ದಾನ ಮಾಡುವುದರಿಂದ ಮತ್ತು ಉಪವಾಸ ಆಚರಿಸುವುದರಿಂದ ನಿಮ್ಮ ಜಾತಕದಲ್ಲಿ ಬುಧ ಉತ್ಕೃಷ್ಟನಾಗುತ್ತಾನೆ.

ಕರ್ಕ: ಷಟ್ತಿಲಾ ಏಕಾದಶಿ 2025 ರಂದು ಹಾಲು ಮತ್ತು ನೀರು ದಾನ ಮಾಡಿ. ಬಡವರಿಗೆ ಎಳ್ಳು ದಾನ ಮಾಡಿ.

ಸಿಂಹ: ಸೂರ್ಯೋದಯದ ಸಮಯದಲ್ಲಿ ಈ ದಿನ ಎಳ್ಳು ದಾನ ಮಾಡಿ.

ಕನ್ಯಾ: ನೀವು ಪುಸ್ತಕ, ಪೆಣ್ ಮತ್ತು ಇತರ ಅಧ್ಯಯನ ಸಾಮಾಗ್ರಿಗಳನ್ನು ದಾನ ಮಾಡಿ. ಧ್ಯಾನದಿಂದ ನಿಮಗೆ ಉತ್ತಮವಾಗುತ್ತದೆ.

ತುಲಾ: ಈ ದಿನ ನೀವು ಬಟ್ಟೆ ಮತ್ತು ಮೇಕಪ್ ಸಾಮಾಗ್ರಿಗಳನ್ನು ದಾನ ಮಾಡಬೇಕು.

ವೃಶ್ಚಿಕ: ಏಕಾದಶಿಯಂದು ವಿಷ್ಣುವಿಗೆ ಕೆಂಪು ಹೂವುಗಳನ್ನು ಅರ್ಪಿಸಿ. ಎಳ್ಳು ದಾನ ಮಾಡಿ.

ಧನು: ಪುಸ್ತಕ ದಾನ ಮಾಡಿ. ಬಡವರಿಗೆ ಮತ್ತು ಬ್ರಾಹ್ಮಣರಿಗೆ ಎಳ್ಳು ದಾನ ಮಾಡಿ.

ಮಕರ: ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆವೃದ್ಧರಿಗೆ ಮತ್ತು ಅಗತ್ಯವಿರುವವರಿಗೆ ದಾನ ಮಾಡಿ.

ಕುಂಭ: ಸಾಮಾಜಿಕ ಕಾರ್ಯ ಮಾಡಿ, ಬಡವರಿಗೆ ಎಳ್ಳು ದಾನ ಮಾಡಿ.

ಮೀನ: ಅಧ್ಯಯನಕ್ಕೆ ಸಂಬಂಧಪಟ್ಟ ವಸ್ತುಗಳನ್ನು ದಾನ ಮಾಡಿ.

ಜ್ಯೋತಿಷ್ಯ ಪರಿಹಾರಗಳು ಮತ್ತು ಸೇವೆಗಳಿಗಾಗಿ, ಭೇಟಿ ನೀಡಿ: ಆಸ್ಟ್ರೋಸೇಜ್ ಆನ್‌ಲೈನ್ ಶಾಪಿಂಗ್ ಸ್ಟೋರ್

ನೀವು ನಮ್ಮ ಬ್ಲಾಗ್ ಇಷ್ಟಪಟ್ಟಿದ್ದೀರಿ ಎಂದು ನಾವು ಭಾವಿಸುತ್ತೇವೆ. ಆಸ್ಟ್ರೋಸೇಜ್ ಕುಟುಂಬದ ಪ್ರಮುಖ ಭಾಗವಾಗಿದ್ದಕ್ಕಾಗಿ ಧನ್ಯವಾದಗಳು. ಹೆಚ್ಚು ಆಸಕ್ತಿದಾಯಕ ಬ್ಲಾಗ್‌ಗಳಿಗಾಗಿ, ನಮ್ಮೊಂದಿಗೆ ಸಂಪರ್ಕದಲ್ಲಿರಿ!

ಹೆಚ್ಚಾಗಿ ಕೇಳುವ ಪ್ರಶ್ನೆಗಳು

1. 2025 ರಲ್ಲಿ ಷಟ್ತಿಲಾ ಏಕಾದಶಿ ಯಾವಾಗ?

ಷಟ್ತಿಲಾ ಏಕಾದಶಿ 25ನೇ ಜನವರಿ 2025 ರಂದು ಬರುತ್ತದೆ.

2. ಷಟ್ತಿಲಾ ಏಕಾದಶಿಯಂದು ಉಪವಾಸ ಮಾಡುವುದರಿಂದ ಏನಾಗುತ್ತದೆ?

ಈ ಉಪವಾಸವನ್ನು ಆಚರಿಸುವುದರಿಂದ ಜನರು ಮೋಕ್ಷವನ್ನು ಪಡೆಯಬಹುದು.

3. ಏಕಾದಶಿ ಉಪವಾಸವನ್ನು ಯಾರು ಮಾಡಬಹುದು?

ಏಕಾದಶಿಯಂದು ಯಾರು ಬೇಕಾದರೂ ಉಪವಾಸ ಮಾಡಬಹುದು.

Astrological services for accurate answers and better feature

33% off

Dhruv Astro Software - 1 Year

'Dhruv Astro Software' brings you the most advanced astrology software features, delivered from Cloud.

Brihat Horoscope
What will you get in 250+ pages Colored Brihat Horoscope.
Finance
Are money matters a reason for the dark-circles under your eyes?
Ask A Question
Is there any question or problem lingering.
Career / Job
Worried about your career? don't know what is.
AstroSage Year Book
AstroSage Yearbook is a channel to fulfill your dreams and destiny.
Career Counselling
The CogniAstro Career Counselling Report is the most comprehensive report available on this topic.

Astrological remedies to get rid of your problems

Red Coral / Moonga
(3 Carat)

Ward off evil spirits and strengthen Mars.

Gemstones
Buy Genuine Gemstones at Best Prices.
Yantras
Energised Yantras for You.
Rudraksha
Original Rudraksha to Bless Your Way.
Feng Shui
Bring Good Luck to your Place with Feng Shui.
Mala
Praise the Lord with Divine Energies of Mala.
Jadi (Tree Roots)
Keep Your Place Holy with Jadi.

Buy Brihat Horoscope

250+ pages @ Rs. 599/-

Brihat Horoscope

AstroSage on MobileAll Mobile Apps

Buy Gemstones

Best quality gemstones with assurance of AstroSage.com

Buy Yantras

Take advantage of Yantra with assurance of AstroSage.com

Buy Feng Shui

Bring Good Luck to your Place with Feng Shui.from AstroSage.com

Buy Rudraksh

Best quality Rudraksh with assurance of AstroSage.com
Call NowTalk to
Astrologer
Chat NowChat with
Astrologer